ವಚನ - 1099     
 
ಸ್ಥಲ ಹದಿನಾಲ್ಕಕ್ಕೆ ಜಲಂಗಳೇಳಾಗಿ ಪರಿವೇಷ್ಠಿಸಿಕೊಂಡಿಪ್ಪುದು. ಆ ಸ್ಥಲ ಜಲಾದಿಗಳಿಪ್ಪವು ಒಂದು ವಟವೃಕ್ಷದ ಪತ್ರದಲ್ಲಿ. ಇಂಥ ವಟವೃಕ್ಷಂಗಳು ಹದಿನಾಲ್ಕನು ಅವಗ್ರಹಿಸಿಕೊಂಡಿ[ಪ] ನಿನ್ನಯ ಸೀಮೆ ಸರ್ವಾಂಗವನವಗ್ರಹಿಸಿಕೊಂಡಿಪ್ಪುದು ಎಮ್ಮ ಶರಣರ ಕರಸ್ಥಲವಾವುದ ಘನವೆಂಬೆವಾವುದ ಕಿರಿದೆಂಬೆನೆಲೆಯಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ.