ವಚನ - 1179     
 
ಆಗುವುದನು ತಪ್ಪಿಸೆಹೆನೆಂದಡೆ ತಪ್ಪಲರಿಯದು. ಆಗು ಭೋಗಂಗಳ ತಪ್ಪಿಸುವಡೆ ಸಚ್ಚಿದಾನಂದ ಶಿವಯೋಗಿಗಲ್ಲದೆ ನರರಿಗೆಲ್ಲಿಯದೊ, ಕಪಿಲಸಿದ್ಧಮಲ್ಲಯ್ಯಾ !