ವಚನ - 1220     
 
ಶ್ರುತಿ ಸ್ಮೃತಿ ಪುರಾಣಾಗಮಮೋಪನಿಷದ್ವಾಕ್ಯಂಗಳನರಿವರಲ್ಲದೆ, ಶ್ರುತ್ಯತೀತಮೂರ್ತಿಯನರಿದವರು ಒಬ್ಬರೂ ಇಲ್ಲ ನೋಡಯ್ಯಾ, `ಸರ್ವಂ ಖಲ್ವಿದಂ ಬ್ರಹ್ಮ' ಎಂದರಿದು ಮತ್ತೇನನರಿಯದೆ ಹೋದೆನಯ್ಯಾ, ನಿಮ್ಮ ಮಹಾಬಯಲಲ್ಲದೆ ಕಪಿಲಸಿದ್ಧಮಲ್ಲಿಕಾರ್ಜುನಾ.