ವಚನ - 1275     
 
ರೂಪಿಂಗೆ ಸ್ವರೂಪು, ಜ್ಞಾನಕ್ಕೆ ಸುಜ್ಞಾನ, ಪ್ರಾಣಕ್ಕೆ ಪ್ರಸಾದ ಲಿಂಗತ್ರಯವ ವೇಧೆಯಿಂದವೆ ತಂದು ಅವರವರ ಕರದಲ್ಲಿ ದೀಕ್ಷೆಯ ಮಾಡಿದನು ಚೆನ್ನಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ.