ವಚನ - 1305     
 
ಎಲೆ ಅಯ್ಯಾ ಗಾರುಡವ ಬಲ್ಲನಯ್ಯಾ, ಮತ್ತೆ ಗಾರುಡಿಗನಲ್ಲ ನೋಡಯ್ಯಾ. ಎನ್ನ ಮನದ ಮೇಲಿಪ್ಪ ಶಂಕೆಯೆಂಬ ವಿಷವ ಗಾರುಡಿಸಿ ಮಾಣಿಸಿ ನಿಶ್ಶಂಕನ ಮಾಡಿದ ಕಪಿಲಸಿದ್ಧಮಲ್ಲಿನಾಥನಲ್ಲಿ ಮಡಿವಾಳ ಮಾಚಿತಂದೆಯ ಪಾದಕ್ಕೆ ನಮೋ ನಮೋ ಎನುತಿರ್ದೆನು.