ವಚನ - 1477     
 
ಅಗ್ನಿಯ ಮುಟ್ಟಿದ ಕಾಷ್ಠ ಇದ್ದಲಿಯಾಯಿತ್ತು ; ಇದ್ದಲಿಯದು ಕಾಷ್ಠವಾಗದು. ಭಕ್ತ ತಾನು ವಿರಕ್ತನಾದನು; ವಿರಕ್ತ ತಾನು ಭಕ್ತನಾಗನು. ಇದರಿರವ ಗುರು ಚೆನ್ನಬಸವಣ್ಣ ತೋರಿದನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.