ವಚನ - 1478     
 
ಕಾಷ್ಠದಿಂದ ಮುಟ್ಟಿದ ನೀರ ತಾ ಮುಟ್ಟನೆಂಬಂತೆ, ಬಿಸಿಲಿನಿಂದ ಬಳಲಿ, ಕಾಯ ತಾನಲ್ಲೆಂಬಂತೆ, ಮನಮುಟ್ಟಿದ ವಿಷಯ ತಾ ಮುಟ್ಟನೆಂಬ ವೇದಾಂತಿಯ ಹಲ್ಲುದೋರೆ ಮೂಗ ಕೊಯ್ವನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನನವರ.