ವಚನ - 1498     
 
ಜಗವಾಧರಿಸಿದ ಕಣ್ಣು ತನ್ನ ತಗುಳ್ವ ಕಾಯವ ಕಾಣದು. ತಿಳಿವ ಅರಿವು ತನ್ನ ತಗುಳ್ವ ಭವದ ಮೊನೆಯ ಕಾಣದು. ವಿವೇಕಪರನಾದಡೆ ಕಾಣದುದು ಕಾಂಬುದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.