ವಚನ - 1516     
 
ಭಕ್ತಂಗೆ ಲಿಂಗಪೂಜೆ ಜಂಗಮದಾಸೋಹ ವಿಘ್ನವಯ್ಯಾ. ಮಹೇಶಂಗೆ ವಿಷಯಂಗಳಳಿವುದೆ ವಿಘ್ನವಯ್ಯಾ. ಪ್ರಸಾದಿಗೆ ನಿರ್ಮಲ ಮನಸ್ಸಾಗುವುದೆ ವಿಘ್ನವಯ್ಯಾ. ನಿರ್ವಿಘ್ನರಾದವರನೊರ್ವರು ಕಾಣೆ ನಿರ್ವಯಲ ನಿಜಾನಂದದರುಹಿನ ಕುರುಹ ಬಿಟ್ಟು, ಕಪಿಲಸಿದ್ಧಮಲ್ಲಿಕಾರ್ಜುನಾ ಮಹಾದೇವನಲ್ಲಿ.