ವಚನ - 1575     
 
ಕರಣಾದಿಗಳೆಲ್ಲ ಪರಶಿವನೆಂದ ಬಳಿಕ, ಆ ಕರಣಾದಿಗಳ `ಭೋಜನ ಕೊಳ್ಳು' ಎನಬಾರದೆಂದು, `ಪರಶಿವಪ್ರಸಾದ' ಎಂಬ ನಾಮವಿಟ್ಟನಯ್ಯಾ ಶ್ರೀಗುರು. ಆ ಕಾರಣ ಬಂದ ಪ್ರಸಾದವೆಲ್ಲ ಶಿವಪ್ರಸಾದವೆಂದು ಭುಂಜಿಸಬೇಕಲ್ಲದೆ, ಕಟು ಆಮ್ಲ ತಿಕ್ತವೆಂದು ಭೋಗಿಸಿದಡೆ, ಭವ ತಪ್ಪದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.