ವಚನ - 1608     
 
ಜ್ಞಾನಾಭ್ಯಾಸದಲ್ಲಿ ವಟಮೂಲಿಕೆಯ ಬೀಜದಂತಿರಬಲ್ಲಡೆ ಭಕ್ತನಯ್ಯಾ. ಆ ಜ್ಞಾನದಲ್ಲಿ ಅಗ್ನಿಯಂತಿರಬಲ್ಲಡೆ ಭಕ್ತನಯ್ಯಾ. ಭಕ್ತನು ಭಕ್ತನು ಎಂದು ಬೆಳೆದ ಧಾನ್ಯಂಗಳನಟ್ಟು ಬೆಟ್ಟಬಿಲ್ಲಯ್ಯನ ರೂಹಕ್ಕೆ ಒಟ್ಟಿ ಭಕ್ತನಾದೆನೆಂಬವನ ಯುಕ್ತಿ ಲೊಳಲೊಟ್ಟೆಯಂತೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.