ವಚನ - 1633     
 
ಹೇಮಾಭಿಧಾನವದು ಮಂದರಾದ್ರಿಯಯ್ಯಾ. ಸಿದ್ಧರವರು ಪರಿಚಾರಕರಯ್ಯಾ. ನಿಮ್ಮ ರಾಣಿವಾಸದ ಜನನವಯ್ಯಾ ಈತ ಲೋಕದಲ್ಲಿ. ಅಂದಿಗಯ್ಯಾ ಸಮಾಧಿಯ ಬಿಡುಗಡೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.