ವಚನ - 1707     
 
ತಿಳಿಯದ ಜನರು ಆವು ಶಿವನಲ್ಲ, ಜಡಜೀವಿಗಳು ಎಂಬುವರು. ಅದೆಂತಯ್ಯಾ `ಪಂಚತತ್ತ್ವಂ ಮುಖೋದ್ಭೂತಂ' ಎಂಬಾಗಮವಾಕ್ಯಸಿದ್ಧಿ? ಪಂಚತತ್ತ್ವಂಗಳೆಲ್ಲ ಶಿವನ ಪಂಚಮುಖದಿಂದಾದವು. ಆ ಪಂಚತತ್ತ್ವದಿಂದ ಸಕಲ ಚರಾಚರಬ್ರಹ್ಮಾಂಡವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಲೀಲೆಯಿಂದ ಕಲ್ಲಯ್ಯಾ.