ವಚನ - 1706     
 
ತರ್ಕಿಸಿದಲ್ಲಿ ವಾದಿಸಿ ಶಿಖಾಮುದ್ರೆ ಸಾಧಿಸುವವರೊಂದು ಕೋಟಿ. ವೇದಾಂತದಲ್ಲಿ ವಾದಿಸಿ ಶಿಖಾಮುದ್ರೆ ಸಾಧಿಸುವವರೊಂದು ಕೋಟಿ. ಶರಣನ ವಾದಿಸಿ ಶಿಖಾಮುದ್ರೆಯ ಸಾಧಿಸುವದದು ಶರಣನ ಬಿಟ್ಟು ಶರ ತಾಗಿದವರಲ್ಲೋರ್ವರಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.