ವಚನ - 1732     
 
ಭೂತ ಭವಿಷ್ಯದ್ವರ್ತಮಾನಗಳಿರಿವಿಕೆಯದು ಭೂತಪ್ರಾಣಿಗಳಿಗೆ ರಂಜನೆಯಲ್ಲದೆ ಭೂತೇಶನ ಮನೋರಂಜನೆಯಾಗದು ನೋಡಾ ಮನವೆ. ನಿತ್ಯ ಲಿಂಗಾರ್ಚನೆ, ನಿತ್ಯಾನುಷ್ಠಾನ, ನಿತ್ಯ ಮಂತ್ರವಿಚಾರ, ನಿತ್ಯ ಪಾದೋದಕ-ಪ್ರಸಾದ ಸ್ವೀಕಾರವದು ಕಪಿಲಸಿದ್ಧಮಲ್ಲಿಕಾರ್ಜುನನ ಮನಃಕಿಂಜಲ್ಕ ವಿಕಸನ ನೋಡಾ, ಮನೋಭ್ರಮರವೆ.