ವಚನ - 1753     
 
ಅಗ್ನಿಯ ಸೋಂಕಿದಲ್ಲಿ ಕನಕದ ಕಲಂಕ ಹೋಯಿತ್ತು. ಜಲವ ಸೋಂಕಿದಲ್ಲಿ ದೇಹದ ಕಲಂಕ ಹೋಯಿತ್ತು. ಬಾಗೀರಥಿಯ ಸೋಂಕಿದ ದೋಷ ದಗ್ಧವಾಗಿ ಹೋಯಿತ್ತು. ನಮ್ಮ ಮಲ್ಲಿಕಾರ್ಜುನನೆಂಬ ಲಿಂಗವ ಸೋಂಕಿದಲ್ಲಿ ಪ್ರಾರಬ್ಧತ್ರಯ ನಿವಾರಣವಾಗಿ ಹೋಯಿತ್ತು, ಕಂಡೆಯಾ ಬಾಚರಸಯ್ಯಾ.