ವಚನ - 1765     
 
ಶ್ರುತಿಯಲ್ಲಿ ಕೂಗಿಡುವುದದು ಪರಾತ್ಪರ ಪಂಚಾಕ್ಷರ ಎಂಬುದಾಲಿಸಯ್ಯಾ. ಎನ್ನ ಮತಿಯಲ್ಲಿ ತೋರುವುದದು ಪರಾತ್ಪರ ಪದಮಾಷ್ಟವರ್ಣಂ: `ಓಂ ಚೆನ್ನಬಸವಾಯ ನಮಃ' ಎಂಬುದಾಲಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.