ವಚನ - 1785     
 
ಭಕ್ತ ತಾನಾದ ಬಳಿಕ ಪಂಚಮುದ್ರೆಗಳಿಂದಲಂಕೃತನಾಗಿರಬೇಕು ಅಲಂಕಾರಿ ತಾನಾದ ಬಳಿಕ ಶಿವಮುದ್ರೆ ಶಿವಭಾವ ಅಚ್ಚೊತ್ತಿರಬೇಕು. ``ಗುರೌ ಲಿಂಗೇsಕ್ಷಮಾಲಾಯಾಂ ಮಂತ್ರೇ ಭಸ್ಮನಿ ಪಂಚಸು ಏತಾಸು ಶಿವಮುದ್ರಾಸು ಶಿವಸದ್ಭಕ್ತಿಮಾಚರೇತ್||" ಎಂದು ವಾತುಲಾಗಮದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ವಚನವುಂಟು, ನೋಡಾ ಕೇದಾರಯ್ಯಾ.