ವಚನ - 1786     
 
ತಾ ಶಿವಭಕ್ತನಾಗಿ ತನ್ನ ಬಂಧುಗಳ ಭವಿತನದಲ್ಲಿರಿಸಬಾರದಯ್ಯಾ. ಮಾತಿನಿಂದಾಗಲಿ ಮನದಿಂದಾಗಲಿ ಭೀತಿಯಿಂದಾಗಲಿ ಶಿವಭಕ್ತಿಯ ಪೂರೈಸುವುದಯ್ಯಾ. ``ಆತ್ಮೀಯಾನ್ವಿವಿಧಾನ್ ಭೋಗಾಂ ಸ್ತ್ರೀಪುತ್ರಪ್ರಮುಖಾನಪಿ| ಸ್ವಾತ್ಮನೋsಪಿ ವಿಶೇಷೇಣ ತೇಷಾಂ ಚೈವ ಮಾನಯೇತ್||" ಎಂಬ ನುಡಿಯ ನೋಡಿದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನದೇವಾ, ವಾತುಲದಲ್ಲಿ ಕಲ್ಲಯ್ಯಾ.