ವಚನ - 1834     
 
ಪರ್ವತದ ಮಹಿಮೆಯದು ಘನವೆಂದಡೆ, ಪರ್ವತದಲ್ಲಲ್ಲದೆ ವೇಶ್ಯಾಕೋಶಕ್ಕೆ ಹರಿದು ಹರನೆಂದೆನಿಸದಿರಯ್ಯಾ. ಶರಣರ ಮಹಿಮೆಯದು ಘನವೆಂದಡೆ, ಶಿವಶರಣನಲ್ಲಲ್ಲದೆ ಕಿಂಚಿಜ್ಞ ಮಾನವನಲ್ಲಿ ಹರಿಯದು ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.