ವಚನ - 1848     
 
ಕಲ್ಲುದೇವರಲ್ಲಿ ವಲ್ಲಭನಿದ್ದಾನೆಂದು ಲಲ್ಲೆಗರೆಯಬೇಡ, ಖುಲ್ಲತನದಿಂದ. ಒಮ್ಮೆ ಅರಿಯಬಲ್ಲಡೆ, ಕಪಿಲಸಿದ್ಧಮಲ್ಲಿಕಾರ್ಜುನನ ಶರಣರ ಪಾದದಲ್ಲಿ ತಲ್ಲೀಯವಾಗಾ, ಕಲ್ಲಯ್ಯಾ.