ವಚನ - 1861     
 
ಯಥಾ ಭಾವಸ್ತಥಾ ದೇವಃ ಎಂದ ಬಳಿಕ, ದೇವರ ಬಯಲ ಭಾವ ತನ್ನಲ್ಲಿ ಇಂಬುಗೊಂಡಡೆ ಮುಕ್ತಿ. ದೇವ ರೀತಿಯೊಂದು ತನ್ನ ರೀತಿಯೊಂದಾದ ಬಳಿಕ, ಘಟಿಸದು ಕಪಿಲಸಿದ್ಧಮಲ್ಲಿಕಾರ್ಜುನನ ಐಕ್ಯವು.