ವಚನ - 1910     
 
ಕಾಜಿನ ಮಣಿ ಪಚ್ಚದಂದವಿರೆ, ಕಾಜಿನ ಮಣಿಯೆ ಪ್ರಸಿದ್ಧ. ಲೋಕದ ಮಾನವ ಯೋಗಿಯಂತಿರೆ, ಲೋಕದ ಮಾನವನೆ ಪ್ರಸಿದ್ಧ. ಬಾಹ್ಯವರ್ಣ ಜನಪ್ರಸಿದ್ಧವಲ್ಲದೆ, ಕಪಿಲಸಿದ್ಧಮಲ್ಲಿಕಾರ್ಜುನನ ಚಿತ್ತಕ್ಕೆ ಪ್ರಸಿದ್ಧವಲ್ಲ.