ವಚನ - 1911     
 
ಆಂದೋಲನದಲ್ಲಿಹ ರಾಜಶಿಶುವಿನಂತಿರಬಲ್ಲಡೆ, ಅದು ಯೋಗಿಗೆ ಭೂಷಣ. ಸಂಧ್ಯಾಕಾಲದಲ್ಲಿಹ ಪ್ರಕಾಶದಂತೆ ವಿಷಯಸುಖವಿರಬಲ್ಲಡೆ, ಅದು ಯೋಗಿಗೆ ಭೂಷಣ. ವಾರಾಂಗನೆಯಲ್ಲಿಹ ಪ್ರೀತಿಯಂತಿರಬಲ್ಲಡೆ, ಅದು ಯೋಗಿಗೆ ಭೂಷಣ. ಪತಿವ್ರತೆಯಲ್ಲಿಹ ಭಕ್ತಿಯಂತಿರಬಲ್ಲಡೆ ಅದು ಯೋಗಿಗೆ ಭೂಷಣ. ಕಪಿಲಸಿದ್ಧಮಲ್ಲಿಕಾರ್ಜುನಂಗದು ಬಹು ತೋಷಣ ಕೇಳಾ, ಮನವೆ.