ವಚನ - 1919     
 
ಅಕ್ಷರತ್ರಯದ ಗುಂಡಿನಲ್ಲಿ ಸಕಲಾಕ್ಷರ ಮೂರ್ತಿ ಮನೆಯ ಮಾಡಿಕೊಂಡಿದೆ. ಅಕ್ಷರವರಿಯಬಾರದು; ಅರಿದ ಬಳಿಕ ಜನನ ಮರೆಯಬಾರದು; ಮರೆದ ಬಳಿಕ ಅಕ್ಷರದ ಧ್ಯಾನ ನೆಲೆಗೊಳಿಸಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.