ವಚನ - 1048     
 
ಕರ್ಮ ಚರಣಾದಿಗಳು ಬೇರಾದವಲ್ಲದೆ ಅರಿದು ಮುಟ್ಟುವುದು ಒಂದೆ ಆತ್ಮ. ಬಿಂದುವಿನ ಒಂದು ಸಾರದಲ್ಲಿ, ಸಸಿ ಹಲವು ನಾಮ ಬೆಳೆವಂತೆ ಗುಹೇಶ್ವರಲಿಂಗದಲ್ಲಿ `ನಾ' `ನೀ' ಎಂಬ ಭಾವವಿಲ್ಲ ಸಿದ್ಧರಾಮಯ್ಯಾ.