ವಚನ - 1206     
 
ತನ್ನ ತಾನರಿತ ಬಳಿಕ ಅನ್ಯವಿಲ್ಲ. ಕಾಬ ಮರಹು ನಷ್ಟವಾಯಿತ್ತು. ಆ ಮರವೆ ನಷ್ಟವಾದ ಬಳಿಕ ಅರಿವಿನ ಮರವೆಯ ನೆರೆ ಮರೆದ ಬಳಿಕ ಅಲ್ಲಿ ನಿಶ್ಶಬ್ದವಾಯಿತ್ತು ಗುಹೇಶ್ವರಾ.