ವಚನ - 1312     
 
ನೆಲದ[ತ್ತ] ಮುಂದಣ ಬಾಗಿಲು, ಮೂರು ಮೊನೆಯ ಕಂಭದ ಶೂಲದಲ್ಲಿ ಒಂದು ದೇಗುಲ! ಅಲ್ಲಿ ಒಳಗಣ ಹೂವಿನ ಕಲ್ಲಿನಲ್ಲಿ ನೆಲಸಿ ನಾದ ಮೂರುತಿ ಲಿಂಗವಿಪ್ಪುದು. ಒಂದು ಮಾತನಾಡಿದಡೆ ನುಡಿವುದು. ಗುಹೇಶ್ವರ ಮೆಚ್ಚನು, ಬಹುಮಾತಿನ ಮಾಲೆಯ ಅನುಭಾವಕ್ಕೆ ನಾಚುವನು ಕಾಣಾ ಸಂಗನಬಸವಣ್ಣಾ.