ವಚನ - 1408     
 
ಭಾವುಕರಿಗೆ ಮೂರ್ತಿಯ ಆರಾಧನೆ ಸಂಸಾರಕ್ಕೆ ಬೀಜ, ಲಿಂಗಾರಾಧನೆ ಭವಕ್ಕೆ ಬೀಜ. ಲಿಂಗಸ್ವಾಯತ ಜಂಗಮವೆ ಪ್ರಾಣಲಿಂಗ. ಇದು ಕಾರಣ-ಗುಹೇಶ್ವರಾ ಸಂಗನಬಸವಣ್ಣನ ಮರೆಯ ಹೊಕ್ಕು ಬದುಕಿದೆನು.