ವಚನ - 1424     
 
ಮನಮಗ್ನವೆಂತಿರ್ಪುದು ಅಂತೆ ಇರಬೇಕಲ್ಲದೆ ಮತ್ತೊಂದು ಮನವೆಂಬುದುಂಟೆ ಹೇಳಾ? ಅರಿದು ಮರೆದುದ ಅರಿದು ನುಡಿದು, ಮರೆದೆನೆಂಬ ಜ್ಞಾನವುಂಟೆ? ಗುಹೇಶ್ವರಲಿಂಗವು ನೆರೆ ಅರಿದೆನೆಂಬಲ್ಲಿ ಮನವ ಮರೆಮಾಡಿ ಕಾಡುವನು.