ವಚನ - 1428     
 
ಮನ ಮನ ಬೆರಸಿ ಸಮರತಿಯ ಸಂಗದಲ್ಲಿ ಸುಖಿಗಳಾಗಿಪ್ಪ ಶರಣರ ಸಂಗಸುಖವನು ಆ ಶರಣರೆ ಬಲ್ಲರಲ್ಲದೆ ಕೆಲದಲ್ಲಿದ್ದವರಿಗೆ ಅರಿಯಬಹುದೆ? ನಿಜಗುಣಭರಿತ ಶಿವಶರಣರ ನಿಲವ ಕಂಡಿಹೆನೆಂದಡೆ ಕಾಣಬಹುದೆ? ಗುಹೇಶ್ವರಲಿಂಗದಲ್ಲಿ ಮಡಿವಾಳ ಮಾಚಯ್ಯನ ಪರಿಯ ನೀ ಬಲ್ಲೆ. ನನಗೊಮ್ಮೆ ಹೇಳಾ ಸಂಗನಬಸವಣ್ಣಾ.