ವಚನ - 159     
 
ಹಸಿವಾಯಿತ್ತೆಂದು ಹುಸಿದು ಮಜ್ಜನಕ್ಕೆರೆವರಯ್ಯಾ. ತೃಷೆಯಾಯಿತ್ತೆಂದು ಅರ್ಪಿತವ ಮಾಡುವರಯ್ಯಾ. ಇದೆಂತೊ ಭಕ್ತಸಂಬಂಧ? ಇದೆಂತೊ ಶರಣಸಂಬಂಧ? ಇದೆಂತೊ ಲಿಂಗಸಂಬಂಧ? ಕಾರಣವಿಲ್ಲದ ಭಕ್ತಿಯ ಕಂಡಡೆ, ಹೋಗ ನೂಕುವನು ಗುಹೇಶ್ವರ.