ವಚನ - 164     
 
ಬೆಳಗಿನೊಳಗಣ ರೂಪ ತಿಳಿದು, ನೋಡಿಯೆ ಕಳೆದು, ಹಿಡಿಯದೆ ಹಿಡಿದುಕೊಳ್ಳಬಲ್ಲನಾಗಿ-ಆತ ಲಿಂಗಪ್ರಸಾದಿ! ಜಾತಿ ಸೂತಕವಳಿದು ಶಂಕೆ ತಲೆದೋರದೆ, ನಿಶ್ಶಂಕನಾಗಿ, ಆತ ಸಮಯಪ್ರಸಾದಿ! ಸಕಲ ಭ್ರಮೆಯನೆ ಜರೆದು, ಗುಹೇಶ್ವರಲಿಂಗದಲ್ಲಿ ಪ್ರಸನ್ನವ ಪಡೆದಾತ ಸಂಗನ ಬಸವಣ್ಣನೊಬ್ಬನೆ ಅಚ್ಚಪ್ರಸಾದಿ!