ವಚನ - 117     
 
ಅರುವತ್ತಾರಕ್ಷರವ ಕುರುಹುಗೆಟ್ಟ ಸೀಮೆಯ ತೆರಹಿಗೆ ಬಂದವರಿನ್ನಾರೊ. ಮೇಲೆ ಬ್ರಹ್ಮಾಂಡವನು ಧರಿಸಿ ಇಲ್ಲದಂತೆಯಿಪ್ಪವರಾರೊ. ಆನಂದದಾದಿಯಲಿ ಅಪರ ಶೂನ್ಯನಾದೆ. ಅಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ ಅಯ್ಯ.