ವಚನ - 205     
 
ಆರೂಢದೈಕ್ಯವನು ತೋರಿಪ್ಪ ಸೀಮೆಯನು ಮೀರಿಪ್ಪುದೊಂದು ಬಿಂದುರೂಪು. ಬಿಂದುಗಳು ಕಳೆಗಳನು ಸಂಧಿಸುವ ಭೇದವನು ಚಂದ್ರಮಂಡಲದಲ್ಲಿಯೊಪ್ಪಿ ತೋರೆ ಆನಂದದಕ್ಷರಂಗಳ ಛಂದವಿದೆಂದಡೆ ಹಿಂದುಮುಂದುಗೆಡುವ ಕಪಿಲಸಿದ್ಧಮಲ್ಲಿಕಾರ್ಜುನಾ.