ಉದಯೇ ಜನನಂ ನಿತ್ಯಂ ರಾತ್ರ್ಯಾಂ ಚ ಮರಣಂ ತಥಾ
ಅಜ್ಞಾನಂ ಸರ್ವಜಂತೂನಾಂ ತದ್ವಿಧಿಶ್ಚ ಪುನಃ ಪುನಃ
ಕ್ಷೀಣಾಯುರಗ್ನಿಮಾಂದ್ಯಂ ಚ ರೋಗೋದ್ರೇಕಶ್ಚ ಕಾರ್ತಿಕ!'
ನಿದ್ರಾಮಾತ್ರೇಣ ಜಾಯಂತೇ ಮನಃ ಪವನಸಂಯುತಂ
ಎಂದುದಾಗಿ,
ರೂಪಿಲ್ಲದವಳೊಡನಾಡಿ ಮೃತ್ಯುವಿಪ್ಪ ಠಾವನರಿಯಬಾರದು.
ಹಿತವೆಯಂತಿಪ್ಪಳು ಒತ್ತಿ ಕೆಡಹುವಳು.
ದೊಪ್ಪನೆ ಭೂಮಿಗೆ ಒರಗಿಸುವಳು.
ಇವಳು ಅಪ್ಪುವ ಅಗಲುವ ಪರಿಯೇ ನೋಡಯ್ಯಾ.
ಈ ಲೋಕದೊಳಗೆಲ್ಲರೂ ಅಜ್ಞಾನನಿದ್ರಾಮಾಯಾಶಕ್ತಿಯ ಸಂಗದಿಂದ
ಮರೆದೊರಗುತ್ತೈದಾರೆ.
ಎನಗಿದ ತಪ್ಪಿಸಿ ನಿಮ್ಮೊಳಗಿರಿಸಿಕೊಳ್ಳಯ್ಯಾ ಪ್ರಭುವೆ
ಕಪಿಲಸಿದ್ಧಮಲ್ಲಿನಾಥದೇವರ ದೇವ.
Music
Courtesy:
Transliteration
Udayē jananaṁ nityaṁ rātryāṁ ca maraṇaṁ tathā
ajñānaṁ sarvajantūnāṁ tadvidhiśca punaḥ punaḥ
kṣīṇāyuragnimāndyaṁ ca rōgōdrēkaśca kārtika!'
Nidrāmātrēṇa jāyantē manaḥ pavanasanyutaṁ
endudāgi,
rūpilladavaḷoḍanāḍi mr̥tyuvippa ṭhāvanariyabāradu.
Hitaveyantippaḷu otti keḍahuvaḷu.
Doppane bhūmige oragisuvaḷu.
Ivaḷu appuva agaluva pariyē nōḍayyā.
Ī lōkadoḷagellarū ajñānanidrāmāyāśaktiya saṅgadinda
maredoraguttaidāre.
Enagida tappisi nim'moḷagirisikoḷḷayyā prabhuve
kapilasid'dhamallināthadēvara dēva.