ವಚನ - 270     
 
ಉಸುರ ಹಿಡಿದು ಮಜ್ಜನಕ್ಕೆರೆವೆನಯ್ಯಾ ನಿಮಗೆ; ವಿಷಯ ಮಾದು ಗಂಧವನೀವೆನಯ್ಯಾ ನಿಮಗೆ; ನೆನೆಹ ನೆಲೆಗೊಳಿಸಿ ಕೊಡುವೆನು ಕುಸುಮವನು; ತನುಗುಣಾದಿಗಳನುರುಹಿ ದಶಾಂಗಧೂಪವನಿಕ್ಕುವೆನು. ಎನ್ನನೆ ನಿಮಗೆ ಬೋನಕ್ಕೆ ಸವೆವೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ, ಹೊರ ಬಳಕೆಯ ಪೂಜೆಗೆ ಎರಗದೆನ್ನ ಮನವು.