ವಚನ - 278     
 
ಎಂತೆಂತು ನೋಡಿದಡೀ ಮನವು ಸಂತವಿಡಲೀಯದಯ್ಯಾ. ನಿಮ್ಮಯ ಚಿಂತೆಗೆ ಒಳಗಾಗದೆ ದೆಸೆದೆಸೆವರಿವುದು, ಕಾಮಕಿಚ್ಚೈಸೂದು, ಕ್ರೋಧಕಿಚ್ಚೈಸೂದು, ಆಮಿಷ ತಾಮಸಕ್ಕೆ ತಾನೆ ಮುಂದಾಗಿಪ್ಪುದು. ಇದ ಮೂಲನಾಶವ ಮಾಡೆ ನೀ ಮುಂದಾಗಯ್ಯ ತಂದೆ ಕಪಿಲಸಿದ್ಧಮಲ್ಲಿಕಾರ್ಜುನ.