ವಚನ - 333     
 
ಎಸಳ ಮಂಟಪದಲ್ಲಿ ಕುಸುಮನಾಳದ ಭೇದ ಶಶಿಧರನ ಮಸ್ತಕದ ಧವಳಗಿರಿಯ ಒಸರುವ ಆನಂದ ವಿಪರೀತ ಭಾಷ್ಪವಿನ- ಲೆಸೆದಿರ್ದುದೈದೆ ಸದ್ಭಕ್ತಿಕ್ರೀಯು. ಶಶಿಧರ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ವಶದೊಳಿರ್ಪಂಗಲ್ಲದೆ ಕಾಣಲರಿದು.