ವಚನ - 359     
 
ಒಂದರಲ್ಲಿ ಓಂಕಾರ ಭವಿಸಿತ್ತು. ಎರಡರಲ್ಲಿ ವ್ಯಾಪ್ತಿ ಭವಿಸಿತ್ತು. ಮೂರರಲ್ಲಿ ಮುಕ್ತ್ಯಂಗನೆಯ ಸಂಗ ಸಮನಿಸಿತ್ತು. ನಾಲ್ಕರಲ್ಲಿ ಆ ಎಂಬ ಅಕ್ಷರದಂತುವನರಿದೆ. ಅಯ್ದರಲ್ಲಿ ಆ ಬ್ರಹ್ಮತಾತ್ಪರ್ಯಶುದ್ಧವ ನಿರೀಕ್ಷಿಸಿದೆ. ಆರರಲ್ಲಿ ಅವ್ಯಯ ಅನಿಮಿಷಸ್ಥಾನವ ಕಂಡೆ. ಮೀರಿದೆ ಮೂವತ್ತಾರ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ `ತತ್ವಮಸಿ' ಸಂಗಮದಲ್ಲಿ ಸಂಯೋಗಿಯಾದೆ.