ವಚನ - 369     
 
ಒಡಗೂಡಿದ ಒಚ್ಚತನವ ಬಿಡುಮನರು ಬಲ್ಲರೆ, ಮೃಡ, ನಿಮ್ಮ ಶರಣರಲ್ಲದೆ? ಕಡಲೊಳಗಣ ಮುತ್ತಿಪ್ಪ ಕಡು ಪೂತದ ಭೇದವನು ಜಡಜೀವಿಗಳು ಬಲ್ಲರೆ, ಮೃಡ ನಿಮ್ಮ ಶರಣರಲ್ಲದೆ? ಕಪಿಲಸಿದ್ಧಮಲ್ಲಿಕಾರ್ಜುನಾ.