ವಚನ - 392     
 
ಕಣ್ಬೇಟವೆಂಬ ಕಾನನದಲ್ಲಿ ಅರಸುತ್ತಿದ್ದೇನೆ. ಭಕ್ತಿಯೆಂಬ ಹೊಮ್ಮಿಗವ ಸೋವುತ್ತಿದ್ದೇನೆ. ಲಿಂಗತ್ರಯವೆಂಬ ಬಲೆಗಾಗಿ ಮಿಗ ಸಿಕ್ಕಿ ಬಲೆ ಹರಿದೊಂದಾದಡೆ, ಎಯ್ದಿದೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಪರಮ ಮುಕ್ತಿರಾಜ್ಯವನು.