ವಚನ - 393     
 
ಕತ್ತಲೆಯ ಕಾನನದಿ ಇತ್ತರದ ಮಧ್ಯದಲಿ ಸುತ್ತಿಪ್ಪುದದು ಅಖಿಲಲೋಕಕಾಗಿ. ಬೇರು ನಾಶವು ಆಗಿ, ದೀಪ್ತಿ ಅತಿ ಪ್ರಜ್ವಲ್ಯ ಮೂಲಾಧಾರಕ್ಕೆ ಮುನ್ನ ಬಸವಣ್ಣನು, ಬಸವಣ್ಣನ ಕರುಣ ಸದಮಲಜ್ಞಾನಕ್ಕೆ ದೆಸೆ ನಾನು ಆದೆನೈ ಕಪಿಲಸಿದ್ಧಮಲ್ಲಿಕಾರ್ಜುನಾ.