ವಚನ - 399     
 
ಕಮಲ ಸಿಂಹಾಸನದ ವಿಮಲಾತ್ಮನನು ಮಾಡಿ ಸುಮನ ಗುರುಲಿಂಗ ಜಂಗಮವನೊಂದುಮಾಡಿ ಪರಮ ಜ್ಞಾನೋದಯದ ಚೇತನದೊಳಿಟ್ಟ ಶ್ರೀಗುರು ಚೆನ್ನಬಸವಣ್ಣ ಪರಂಜ್ಯೋತಿರ್ಮಯನಯ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.