ವಚನ - 407     
 
ಕರದಲ್ಲಿ ಲಿಂಗವನು ಗುರು ಕುಡಲಿಕಾನಂದ ತನುವಿನೊಳು ಭೇದಿಸುವ ಪರಿಯ ನೋಡಾ. ಉರುತರವು ಕೈವಲ್ಯಪದ ದೀಕ್ಷಾತ್ರಯದಿ ಭವಿಸುವಾತನು ತಾನು ಪರಮಜ್ಞಾನಿ ಶಿಷ್ಯನು ಕಪಿಲಸಿದ್ಧಮಲ್ಲಿಕಾರ್ಜುನಾ.