ವಚನ - 413     
 
ಕರ್ಮಜಸವೆಂಬ ಹಮ್ಮಿನ ತೇಜದಲಿ ನಿರ್ಮಳಜ್ಞಾನಿ ನಿಮ್ಮನರಿಯೆನಯ್ಯಾ, ಕರ್ಮಕ್ಕೊಳಗಾದೆನು, ಮೋಹಮೊಲನ ಬಲೆಗೆ ಗುರಿಯಾದೆನು. ಕಾಯಯ್ಯಾ ಕರುಣಿ ಕಪಿಲಸಿದ್ಧಮಲ್ಲಿಕಾರ್ಜುನಾ.