ವಚನ - 417     
 
ಕರಣ ಕಾನನದೊಳಗಾನು ಹೊಲಬುಗೆಟ್ಟೆನಯ್ಯಾ; ನೆನಹೆಂಬ ಮಠದೊಳಗೆ ನಿರ್ಮಳನಾದೆನಯ್ಯಾ; ಘನತರ ಸಂಯೋಗದಲ್ಲಿ ನೀನು ನಾನಾದೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಸಂದು ಸವೆದು ಒಂದಾದೆ.