ವಚನ - 421     
 
ಕರುಣಾಕರನೆ ಎಂದು ಹೊಗಳುತೈದಾವೆ ಶ್ರುತಿಯು; ಐದಿದಡೆ ಹಾನಿ ಬಿರಿದಿಂಗೆ. ಅಯ್ಯಾ, ಅಯ್ಯಾ, ಕರುಣಾಕರ ಕಪಿಲಸಿದ್ಧಮಲ್ಲೇಶ್ವರಾ, ಓರಂತೆ ಮಾಡಿ ಸಲಹಯ್ಯಾ ಎನ್ನನು.