ವಚನ - 426     
 
ಕರುಣಿಯೆಂದು ಮರೆವೊಕ್ಕಡೆ ನಿಃಕರುಣಿಯಪ್ಪೆ. ಎಲೆ ಅಯ್ಯಾ, ಅರಿಯದೆ ಕಿರಿದು ಮಾಡಿದಡೆ ದಾನಿಯೆಂದು ಭವಕ್ಕೆ ಗುರಿಮಾಡುವರೆ? ಎಲೆ ಅಯ್ಯಾ, ಮರಳಿ ಬಾರದಂತೆ ಮಾಡಯ್ಯಾ, ನಿಮ್ಮ ಧರ್ಮ, ಕಪಿಲಸಿದ್ಧಮಲ್ಲಿಕಾರ್ಜುನಾ.