ವಚನ - 509     
 
ಗ್ರಾಮ ಪಟ್ಟಣವೈದು ಐದೈದ ನಾಯಕರು ತೋರಿಪ್ಪರದ ಕಂಡು ಪ್ರತ್ಯಯವನು. ಸೀಮೆ ಸಂಬಂಧವನು ಮೀರಿಪ್ಪ ನಾಯಕರು ತಾವು ನಿಂದರು ಗಡಿಯ ಸಂಬಂಧವ ಪರದಳವು ಬರಲಾಗಿ ಅರಿಯದೆ ಇದಿರಾಡಿ ಅರಿತು ಬಿಟ್ಟರು ವೀರಧೀರರಾಗಿ. ಅರಿವು ಮರಹನೆ ನುಂಗಿ ಕುರುಹುಗೆಟ್ಟಾ ಸೀಮೆ ತೆರಹಿಲ್ಲದಾತ [ತಾ] ಪರಮಯೋಗಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೆರಹಿನ ಪಟ್ಟಣದ ಪ್ರಭೆಯಿಂತುಟು.